ಅಟವೀಶ್ವರ ಫಿಲಂಸ್ ಲಾಂಛನದಲ್ಲಿ ಉಷಾ ಪುರುಷೋತ್ತಮ್ ಹಾಗೂ ಆಶಾ ಮುನಿಯಪ್ಪ ನಿರ್ಮಿಸುತ್ತಿರುವ ನಮ್ಮವರು ಚಿತ್ರಕ್ಕೆ ಕಳೆದ ವಾರ ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಇಂದಿನ ಸಮಾಜದಲ್ಲಿ ನಡೆಯುವ ಅನೇಕ ನೈಜ ಘಟನೆಗಳನ್ನು ಇಟ್ಟುಕೊಂಡು ಹೇಳ ಹೊರಟಿರುವ ಈ ಚಿತ್ರಕ್ಕೆ ಎನ್.ಪುರುಷೋತ್ತಮ್ ಚಿತ್ರಕಥೆ ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರಕ್ಕೆ ಎಂ.ಮುತ್ತುರಾಜ್ ಛಾಯಾಗ್ರಹಣ, ರಾಜ್ಭಾಸ್ಕರ್ ಸಂಗೀತ, ವಿಷ್ಣುನಾಚನೇಕರ್ ಕಥೆ, ಸಹ ನಿರ್ದೇಶನ, ಸಂಕಲನ, ಪುರುಷೋತ್ತಮ್ ವಿಷ್ಣು ನಾಚನೇಕರ್ ಸಂಭಾಷಣೆ, ಚಿತ್ರದಲ್ಲಿ ಗಣೇಶರಾವ್, ಶ್ರೀನಿವಾಸ ಮೂರ್ತಿ, ಜ್ಯೋತಿ, ತಿಮ್ಮೇಗೌಡ, ಜಯಲಕ್ಷ್ಮಿ ಆಶಾಮುನಿಯಪ್ಪ, ಕೃಶ ಸೋನು, ವೇದಶೇಖರ್, ದವನ್ ಸುಹಾಲ್, ಪ್ರದೀಪ್ ಡಾ:: ಹೇಮ, ಸಿಂಗರ್ ಶ್ರೀನಿವಾಸ್, ರಘು, ಕು: ಅನು, ಮಾ|| ತುಷಾರ್ ತಾರಾ ಬಳಗದಲ್ಲಿದ್ದಾರೆ.